" ದಶಾವತಾರ " ಸರಣಿಯಲ್ಲಿ ಎರಡನೇ ಅವತಾರ ಕೂರ್ಮಾವತಾರ .
ಕೂರ್ಮ ಅಥವಾ ಆಮೆ ಭೂಮಿಯನ್ನು ಬೀಳದಂತೆ ಹಿಡಿದಿದೆ ಎಂಬ ನಂಬಿಕೆ ಹಿಂದೂ , ಬೌದ್ಧ , ಚೀನೀ , ಅಮೆರಿಕಾದ ಇಂಡಿಯನ್ ಸಂಸ್ಕೃತಿಗಳಲ್ಲಿ ಪ್ರಚಲಿತ .
ದೇವತೆಗಳಿಗೆ ಸಾವಿಲ್ಲದಂತೆ ಮಾಡುವ "ಅಮೃತ " ಪಡೆಯೋಕೆ ರಾಕ್ಷಸರು , ದೇವತೆಗಳಿಬ್ಬರೂ ಸಮುದ್ರ ಮಂಥನಕ್ಕೆ ನಿಂತಾಗ , ವಿಷ್ಣು ಕೂರ್ಮ ಅಥವಾ ಆಮೆಯ ರೂಪದಲ್ಲಿ ಬಂದು ದೇವತೆಗಳಿಗೆ ಅಮೃತ ಸಿಗುವ ಹಾಗೆ ಮಾಡುತ್ತಾನೆ .